ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 43 ಪು. 104
  • ರಾಜ ದಾವೀದ ಮಾಡಿದ ಪಾಪ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ರಾಜ ದಾವೀದ ಮಾಡಿದ ಪಾಪ
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ದಾವೀದನ ಮನೆಯಲ್ಲಿ ತೊಂದರೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಜೀವನದ ಬದಲಾಗುತ್ತಿರುವ ಸನ್ನಿವೇಶಗಳನ್ನು ನಿಭಾಯಿಸುವಾಗ ದೇವರಾತ್ಮದ ಮೇಲೆ ಆತುಕೊಳ್ಳಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ಆತ್ಮಿಕ ವಾಸಿಯಾಗುವಿಕೆಗೆ ನಡೆಸುವಂಥ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ‘ಮುರಿದಂಥ, ಜಜ್ಜಿದಂಥ ಹೃದಯವನ್ನು’ ಕ್ಷಮಿಸುವಾತನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 43 ಪು. 104
ಪ್ರವಾದಿ ನಾತಾನ ರಾಜ ದಾವೀದನನ್ನು ತಿದ್ದುತ್ತಿದ್ದಾನೆ

ಪಾಠ 43

ರಾಜ ದಾವೀದ ಮಾಡಿದ ದೊಡ್ಡ ಪಾಪ

ಸೌಲ ಸತ್ತ ನಂತರ ದಾವೀದ ರಾಜನಾದ. ಆಗ ಅವನಿಗೆ 30 ವರ್ಷ. ಕೆಲವು ವರ್ಷಗಳ ನಂತರ ಅವನು ಒಂದು ದೊಡ್ಡ ತಪ್ಪು ಮಾಡಿದ. ಒಂದಿನ ರಾತ್ರಿ ದಾವೀದ ತನ್ನ ಅರಮನೆಯ ಮಾಳಿಗೆಯ ಮೇಲಿಂದ ಸುಂದರ ಹೆಂಗಸನ್ನು ನೋಡಿದ. ಅವಳ ಹೆಸರು ಬತ್ಷೆಬೆ, ಅವಳು ಸೈನಿಕನಾದ ಊರೀಯನ ಹೆಂಡತಿ ಎಂದು ದಾವೀದನಿಗೆ ಗೊತ್ತಾಯಿತು. ದಾವೀದ ಬತ್ಷೆಬೆಯನ್ನು ತನ್ನ ಅರಮನೆಗೆ ಕರೆಸಿ ಅವಳೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಂಡ. ಅವಳು ಗರ್ಭಿಣಿಯಾದಳು. ಈ ತಪ್ಪನ್ನು ಮುಚ್ಚಿಹಾಕಲು ದಾವೀದ ಪ್ರಯತ್ನಿಸಿದ. ಅವನು ತನ್ನ ಸೇನಾಧಿಪತಿಗೆ ‘ಯುದ್ಧದಲ್ಲಿ ಊರೀಯನನ್ನು ಮುಂದಿನ ಸಾಲಲ್ಲಿ ನಿಲ್ಲಿಸಿ ನೀವು ಹಿಂದೆ ಹೋಗಿ’ ಅಂದನು. ಹೀಗೆ ಯುದ್ಧದಲ್ಲಿ ಊರೀಯನನ್ನು ಕೊಲ್ಲಲಾಯಿತು. ನಂತರ ದಾವೀದ ಬತ್ಷೆಬೆಯನ್ನು ಮದುವೆಯಾದ.

ರಾಜ ದಾವೀದ ಕ್ಷಮೆಗಾಗಿ ಪ್ರಾರ್ಥಿಸುತ್ತಿದ್ದಾನೆ

ಆದರೆ ದಾವೀದ ಮಾಡಿದ ಕೆಟ್ಟ ಕೆಲಸಗಳನ್ನು ಯೆಹೋವನು ನೋಡುತ್ತಿದ್ದ. ಆತ ಏನು ಮಾಡಿದ ಗೊತ್ತಾ? ಪ್ರವಾದಿ ನಾತಾನನನ್ನು ದಾವೀದನ ಹತ್ತಿರ ಕಳುಹಿಸಿದ. ನಾತಾನ ದಾವೀದನಿಗೆ ‘ಒಬ್ಬ ಶ್ರೀಮಂತನ ಹತ್ತಿರ ತುಂಬ ಕುರಿಗಳಿದ್ದವು. ಬಡವನ ಹತ್ತಿರ ಒಂದೇ ಒಂದು ಕುರಿಮರಿ ಇತ್ತು. ಅವನು ಅದನ್ನು ತುಂಬಾ ಪ್ರೀತಿಸುತ್ತಿದ್ದ. ಆದರೆ ಒಂದಿನ ಶ್ರೀಮಂತ ಆ ಬಡವನ ಹತ್ತಿರ ಇದ್ದ ಒಂದೇ ಒಂದು ಕುರಿಮರಿಯನ್ನು ತೆಗೆದುಕೊಂಡುಬಿಟ್ಟ’ ಎಂದ. ಇದನ್ನು ಕೇಳಿದಾಗ ದಾವೀದ ಕೋಪಗೊಂಡು ‘ಆ ಶ್ರೀಮಂತ ಸಾಯ್ಲೇಬೇಕು!’ ಅಂದ. ಆಗ ನಾತಾನ ‘ಆ ಶ್ರೀಮಂತ ನೀನೇ!’ ಅಂದಾಗ ದಾವೀದನಿಗೆ ತನ್ನ ತಪ್ಪಿನ ಅರಿವಾಯಿತು. ‘ನಾನು ಯೆಹೋವನ ವಿರುದ್ಧ ಪಾಪ ಮಾಡಿದ್ದೀನಿ’ ಎಂದು ಪಶ್ಚಾತ್ತಾಪಪಟ್ಟ. ದಾವೀದ ಮಾಡಿದ ತಪ್ಪಿನಿಂದ ಅವನು ಮತ್ತೆ ಅವನ ಕುಟುಂಬ ತುಂಬಾ ತೊಂದರೆಗಳನ್ನು ಅನುಭವಿಸಿದರು. ಆದರೆ ಅವನು ಪ್ರಾಮಾಣಿಕ ಮತ್ತು ದೀನನಾಗಿದ್ದರಿಂದ ಯೆಹೋವನು ಅವನನ್ನು ಸಾಯಿಸಲಿಲ್ಲ.

ಯೆಹೋವನ ಆರಾಧನೆಗಾಗಿ ಒಂದು ದೇವಾಲಯವನ್ನು ಕಟ್ಟಬೇಕೆನ್ನುವುದು ದಾವೀದನ ಆಸೆಯಾಗಿತ್ತು. ಆದರೆ ಆಲಯವನ್ನು ಕಟ್ಟಲು ಯೆಹೋವನು ದಾವೀದನ ಮಗನಾದ ಸೊಲೊಮೋನನನ್ನು ಆರಿಸಿದ. ಹಾಗಂತ ದಾವೀದ ಸುಮ್ಮನೆ ಕೈಕಟ್ಟಿ ಕೂರಲಿಲ್ಲ. ಬದಲಿಗೆ ದೇವಾಲಯ ಕಟ್ಟಲು ಬೇಕಾದ ವಸ್ತುಗಳನ್ನು ಕೂಡಿಸಿದ. ದಾವೀದ ಸೊಲೊಮೋನನಿಗೆ ‘ಯೆಹೋವನ ದೇವಾಲಯ ವೈಭವವಾಗಿರಬೇಕು. ನೀನಿನ್ನೂ ಚಿಕ್ಕವನು. ಆಲಯಕ್ಕೆ ಬೇಕಾಗಿರೋ ವಸ್ತುಗಳನ್ನು ನಾನು ನಿನಗೆ ಸಿದ್ಧ ಮಾಡಿಕೊಡುತ್ತೇನೆ’ ಅಂದ. ದಾವೀದ ದೇವಾಲಯ ಕಟ್ಟಲು ತನ್ನ ಸ್ವಂತ ಹಣವನ್ನ ಭಾರಿ ಮೊತ್ತದಲ್ಲಿ ನೀಡಿದ. ನಿಪುಣ ಕೆಲಸಗಾರರನ್ನು ನೇಮಿಸಿದ. ಚಿನ್ನ, ಬೆಳ್ಳಿ, ತೂರ್‌ ಮತ್ತು ಸೀದೋನಿಂದ ದೇವದಾರು ಮರಗಳನ್ನು ಸಂಗ್ರಹಿಸಿದ. ದಾವೀದ ಸಾಯುವುದಕ್ಕಿಂತ ಮುಂಚೆ ದೇವಾಲಯದ ನಕ್ಷೆಯನ್ನ ಸೊಲೊಮೋನನಿಗೆ ನೀಡಿ ‘ಇವುಗಳನ್ನು ಬರೆಯಲು ಯೆಹೋವನೇ ನನಗೆ ತಿಳಿಸಿದ. ಯೆಹೋವನು ನಿನಗೆ ಸಹಾಯ ಮಾಡುತ್ತಾನೆ. ಧೈರ್ಯವಾಗಿರು, ದೃಢವಾಗಿರು, ಈ ಕೆಲಸಕ್ಕೆ ಕೈ ಹಾಕು’ ಎಂದ.

ಯುವ ಸೊಲೊಮೋನನೊಂದಿಗೆ ದೇವಾಲಯದ ನಕ್ಷೆಯ ಬಗ್ಗೆ ಚರ್ಚಿಸುತ್ತಿದ್ದಾನೆ

“ತನ್ನ ಅಪರಾಧಗಳನ್ನ ಮುಚ್ಚಿಡುವವನಿಗೆ ಒಳ್ಳೇದಾಗಲ್ಲ, ಅದನ್ನ ಒಪ್ಕೊಂಡು ಮತ್ತೆ ಮಾಡದೆ ಇರುವವನಿಗೆ ಕರುಣೆ ಸಿಗುತ್ತೆ.”—ಜ್ಞಾನೋಕ್ತಿ 28:13

ಪ್ರಶ್ನೆಗಳು: ದಾವೀದ ಯಾವ ತಪ್ಪು ಮಾಡಿದ? ದಾವೀದ ತನ್ನ ಮಗ ಸೊಲೊಮೋನನಿಗೆ ಹೇಗೆ ಸಹಾಯ ಮಾಡಿದ?

2 ಸಮುವೇಲ 5:3, 4, 10; 7:1-16; 8:1-14; 11:1–12:14; 1 ಪೂರ್ವಕಾಲವೃತ್ತಾಂತ 22:1-19; 28:11-21; ಕೀರ್ತನೆ 51:1-19

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ