ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 49 ಪು. 118-ಪು. 119 ಪ್ಯಾ. 2
  • ಒಬ್ಬ ಕೆಟ್ಟ ರಾಣಿಗೆ ಶಿಕ್ಷೆ ಸಿಕ್ಕಿತು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒಬ್ಬ ಕೆಟ್ಟ ರಾಣಿಗೆ ಶಿಕ್ಷೆ ಸಿಕ್ಕಿತು
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ದುಷ್ಟ ರಾಣಿ-ಈಜಬೇಲ್‌
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಯೇಹು ಸತ್ಯಾರಾಧನೆ ಸಮರ್ಥಿಸಿದ ಧೀರ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ನಿರ್ಣಾಯಕವಾದ ಕ್ರಿಯೆಗೆ ಸಮಯವು ಇದೇ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ನ್ಯಾಯದ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನ ನಿಮಗಿದೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 49 ಪು. 118-ಪು. 119 ಪ್ಯಾ. 2
ಈಜೆಬೇಲಳ ಸೇವಕರು ಅವಳನ್ನು ಕಿಟಕಿಯಿಂದ ಹೊರಗೆ ಹಾಕುತ್ತಿದ್ದಾರೆ

ಪಾಠ 49

ಕೆಟ್ಟ ರಾಣಿಗೆ ಶಿಕ್ಷೆ ಸಿಕ್ಕಿತು

ಒಂದಿನ ರಾಜ ಅಹಾಬ ಇಜ್ರೇಲಿನ ಅರಮನೆಯ ಕಿಟಕಿಯಿಂದ ಹೊರಗೆ ನೋಡುತ್ತಿದ್ದ. ಆಗ ನಾಬೋತನೆಂಬ ವ್ಯಕ್ತಿಯ ದ್ರಾಕ್ಷಿ ತೋಟ ಕಣ್ಣಿಗೆ ಬಿತ್ತು. ಅಹಾಬನಿಗೆ ಆ ತೋಟವನ್ನು ತನ್ನದಾಗಿಸಿಕೊಳ್ಳಬೇಕೆಂಬ ಆಸೆ ಹುಟ್ಟಿತು. ಅದಕ್ಕಾಗಿ ಅವನು ಆ ತೋಟವನ್ನು ಖರೀದಿಸಲು ಪ್ರಯತ್ನಿಸಿದ. ಆದರೆ ನಾಬೋತ ತನ್ನ ತೋಟವನ್ನು ಮಾರಲು ಸಿದ್ಧನಿರಲಿಲ್ಲ. ಯಾಕೆಂದರೆ ತಮ್ಮ ಪೂರ್ವಜರಿಂದ ಸಿಕ್ಕಿರೋ ಆಸ್ತಿನ ಮಾರುವುದು ಯೆಹೋವನ ನಿಯಮ ಪುಸ್ತಕಕ್ಕೆ ವಿರುದ್ಧವಾಗಿತ್ತು. ದೇವರ ನಿಯಮವನ್ನು ಪಾಲಿಸಬೇಕೆಂಬ ನಾಬೋತನ ನಿರ್ಧಾರವನ್ನು ಅಹಾಬ ಗೌರವಿಸಿದನಾ? ಇಲ್ಲ. ಅಹಾಬ ತುಂಬ ಕೋಪಗೊಂಡ. ಅವನಿಗೆ ಎಷ್ಟು ಬೇಜಾರಾಯಿತೆಂದರೆ ತನ್ನ ಕೋಣೆಯಿಂದ ಹೊರಗೆ ಬರಲಿಲ್ಲ, ಊಟನೂ ಮಾಡಲಿಲ್ಲ.

ಅಹಾಬನ ಹೆಂಡತಿ ದುಷ್ಟ ರಾಣಿ ಈಜೆಬೇಲಳು ಅವನಿಗೆ ‘ನೀನು ಇಡೀ ಇಸ್ರಾಯೇಲಿನ ರಾಜ. ನಿನಗೆ ಏನು ಬೇಕೋ ಅದನ್ನೆಲ್ಲಾ ನೀನು ತೆಗೆದುಕೊಳ್ಳಬಹುದು. ಆ ತೋಟವನ್ನು ನಾನು ನಿನಗೆ ಕೊಡಿಸ್ತೀನಿ’ ಅಂದಳು. ನಾಬೋತ ದೇವರನ್ನು ದೂಷಿಸಿದ್ದಾನೆ ಎಂಬ ಆರೋಪ ಹಾಕಿ ಅವನನ್ನು ಕಲ್ಲೆಸೆದು ಕೊಲ್ಲಲು ಊರಿನ ಹಿರೀಪುರುಷರಿಗೆ ಅವಳು ಪತ್ರ ಬರೆದಳು. ಆ ಹಿರೀಪುರುಷರು ಅವಳು ಹೇಳಿದಂತೆ ಮಾಡಿದರು. ಆಗ ಈಜೆಬೇಲಳು ಅಹಾಬನಿಗೆ ‘ನಾಬೋತ ಸತ್ತ. ಅವನ ದ್ರಾಕ್ಷಿ ತೋಟ ಈಗ ನಿನ್ನದು’ ಅಂದಳು.

ಈಜೆಬೇಲಳು ಕೊಂದಿದ್ದು ನಾಬೋತನನ್ನು ಮಾತ್ರ ಅಲ್ಲ. ಯೆಹೋವನನ್ನು ಪ್ರೀತಿಸುತ್ತಿದ್ದ ಇನ್ನೂ ಅನೇಕ ಮುಗ್ಧ ಜನರನ್ನೂ ಕೊಂದಳು. ಮೂರ್ತಿಗಳನ್ನು ಪೂಜಿಸಿದಳು ಮತ್ತು ಇನ್ನೂ ಅನೇಕ ಕೆಟ್ಟ ಕೆಲಸಗಳನ್ನು ಮಾಡಿದಳು. ಅವಳು ಮಾಡುತ್ತಿದ್ದ ಎಲ್ಲಾ ಕೆಟ್ಟ ಕೆಲಸಗಳನ್ನು ಯೆಹೋವನು ನೋಡುತ್ತಿದ್ದನು. ಆತನು ಅವಳಿಗೆ ಏನು ಮಾಡಿದ ಗೊತ್ತಾ?

ಅಹಾಬ ಸತ್ತ ನಂತರ ಅವನ ಮಗ ಯೆಹೋರಾಮ ರಾಜನಾದ. ಯೆಹೋವನು ಈಜೆಬೇಲ್‌ ಮತ್ತು ಅವಳ ಕುಟುಂಬವನ್ನು ಶಿಕ್ಷಿಸಲು ಯೇಹು ಎಂಬ ವ್ಯಕ್ತಿಯನ್ನು ಕಳುಹಿಸಿದನು.

ಯೇಹು ರಥವನ್ನು ಹತ್ತಿ ಈಜೆಬೇಲಳಿದ್ದ ಸ್ಥಳವಾದ ಇಜ್ರೇಲಿಗೆ ಹೋದ. ಆಗ ಯೆಹೋರಾಮ ರಥದಲ್ಲಿ ಬಂದು ಯೇಹುವನ್ನು ಭೇಟಿ ಮಾಡಿ ‘ನೀನು ಶಾಂತಿ ಮಾಡ್ಕೊಳ್ಳೋಕೆ ಬಂದಿದ್ಯಾ?’ ಎಂದು ಕೇಳಿದ. ಆಗ ಯೇಹು ‘ನಿನ್ನ ತಾಯಿ ಈಜೆಬೇಲ್‌ ದುಷ್ಟ ಕೆಲಸಗಳನ್ನು ಮಾಡ್ತಿರೋವಾಗ ಶಾಂತಿ ಎಲ್ಲಿರುತ್ತೆ?’ ಅಂದ. ಯೆಹೋರಾಮ ರಥವನ್ನು ಹಿಂದಕ್ಕೆ ತಿರುಗಿಸಿ ವಾಪಸ್ಸು ಹೋಗಲು ಪ್ರಯತ್ನಿಸಿದ. ಆಗ ಯೇಹು ಬಾಣ ಬೀಸಿ ಅವನನ್ನು ಕೊಂದ.

ಯೇಹು ಈಜೆಬೇಲಳನ್ನು ಕೆಳಗೆ ದೊಬ್ಬಲು ಹೇಳುತ್ತಿದ್ದಾನೆ

ಆಮೇಲೆ ಯೇಹು ಈಜೆಬೇಲಳ ಅರಮನೆಗೆ ಹೋದ. ಯೇಹು ಬರುತ್ತಿದ್ದಾನೆಂಬ ಸುದ್ದಿ ಕೇಳಿ ಈಜೆಬೇಲ್‌ ಅಲಂಕಾರ ಮಾಡಿಕೊಂಡು ಮಾಳಿಗೆಯ ಕಿಟಕಿಯ ಹತ್ತಿರ ನಿಂತು ಕಾಯುತ್ತಿದ್ದಳು. ಯೇಹು ಬಂದಾಗ ಅವನಿಗೆ ಒರಟಾಗಿ ವಂದಿಸಿದಳು. ಆಗ ಯೇಹು ಅವಳ ಪಕ್ಕದಲ್ಲಿ ನಿಂತಿದ್ದ ಸೇವಕರಿಗೆ ‘ಅವಳನ್ನು ಕೆಳಗೆ ದೊಬ್ಬಿ!’ ಅಂದ. ಅವರು ಈಜೆಬೇಲಳನ್ನು ಕಿಟಕಿಯಿಂದ ಹೊರಗೆ ಹಾಕಿದರು. ಅವಳು ಕೆಳಗೆ ಬಿದ್ದು ಸತ್ತಳು.

ಆಮೇಲೆ ಯೇಹು ಅಹಾಬನ 70 ಗಂಡು ಮಕ್ಕಳನ್ನು ಕೊಲ್ಲಿಸಿದ ಮತ್ತು ಬಾಳನ ಆರಾಧನೆಯನ್ನು ತೆಗೆದುಹಾಕಿ ದೇಶವನ್ನು ಶುದ್ಧಮಾಡಿದ. ಈ ಕಥೆಯಿಂದ, ಯೆಹೋವನು ಎಲ್ಲವನ್ನು ನೋಡುತ್ತಿರುತ್ತಾನೆ ಮತ್ತು ಯಾರು ಕೆಟ್ಟ ಕೆಲಸಗಳನ್ನು ಮಾಡುತ್ತಿರುತ್ತಾರೋ ಅವರಿಗೆ ಸರಿಯಾದ ಸಮಯದಲ್ಲಿ ಶಿಕ್ಷೆ ಕೊಡುತ್ತಾನೆಂದು ಗೊತ್ತಾಗುತ್ತೆ ಅಲ್ವಾ?

“ದುರಾಸೆಯಿಂದ ಗಳಿಸಿದ ಆಸ್ತಿ ಕೊನೆಗೆ ಆಶೀರ್ವಾದ ತರಲ್ಲ.”—ಜ್ಞಾನೋಕ್ತಿ 20:21

ಪ್ರಶ್ನೆಗಳು: ನಾಬೋತನ ದ್ರಾಕ್ಷಿ ತೋಟವನ್ನು ಪಡೆಯಲು ಈಜೆಬೇಲ್‌ ಏನು ಮಾಡಿದಳು? ಯೆಹೋವನು ಈಜೆಬೇಲಳನ್ನು ಏಕೆ ಶಿಕ್ಷಿಸಿದನು?

1 ಅರಸು 21:1-29; 2 ಅರಸು 9:1–10:30

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ