ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 54 ಪು. 130-ಪು. 131 ಪ್ಯಾ. 1
  • ಯೆಹೋವನು ಯೋನನ ಜೊತೆ ತಾಳ್ಮೆಯಿಂದ ನಡಕೊಂಡ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನು ಯೋನನ ಜೊತೆ ತಾಳ್ಮೆಯಿಂದ ನಡಕೊಂಡ
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ಕರುಣೆಯ ಪಾಠ ಕಲಿತವನು
    ಅವರ ನಂಬಿಕೆಯನ್ನು ಅನುಕರಿಸಿ
  • ಕರುಣೆಯ ಪಾಠ ಕಲಿತ ಯೋನ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಯೆಹೋವನ ಕರುಣೆಯ ಕುರಿತಾಗಿ ಯೋನನು ಕಲಿಯುತ್ತಾನೆ
    ಕಾವಲಿನಬುರುಜು—1996
  • ಯೋನ ಮತ್ತು ದೊಡ್ಡ ಮೀನು
    ಬೈಬಲ್‌ ಕಥೆಗಳ ನನ್ನ ಪುಸ್ತಕ
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 54 ಪು. 130-ಪು. 131 ಪ್ಯಾ. 1
ಯೋನ ಸಮುದ್ರದ ನೀರಿನಲ್ಲಿ ಮುಳುಗುತ್ತಿರುವಾಗ ದೊಡ್ಡ ಮೀನೊಂದು ಈಜುತ್ತಾ ಬರುತ್ತಿದೆ

ಪಾಠ 54

ಯೆಹೋವನು ಯೋನನ ಜೊತೆ ತಾಳ್ಮೆಯಿಂದ ನಡಕೊಂಡ

ಅಶ್ಶೂರಕ್ಕೆ ಸೇರಿದ ನಿನೆವೆ ಪಟ್ಟಣದ ಜನರು ತುಂಬ ಕೆಟ್ಟವರಾಗಿದ್ದರು. ಆದ್ದರಿಂದ ಅವರು ತಮ್ಮ ಜೀವನವನ್ನು ಬದಲಾಯಿಸಿಕೊಳ್ಳುವಂತೆ ಎಚ್ಚರಿಸಲು ಯೆಹೋವನು ತನ್ನ ಪ್ರವಾದಿ ಯೋನನನ್ನು ಕಳುಹಿಸಿದನು. ಆದರೆ ಯೋನ ಅಲ್ಲಿಗೆ ಹೋಗದೆ ವಿರುದ್ಧವಾದ ದಿಕ್ಕಿಗೆ ಓಡಿಹೋದ. ತಾರ್ಷೀಷಿಗೆ ಹೋಗುವ ಹಡಗನ್ನು ಹತ್ತಿ ಪ್ರಯಾಣ ಆರಂಭಿಸಿದ.

ಸಮುದ್ರದ ಮಧ್ಯೆ ದೊಡ್ಡ ಬಿರುಗಾಳಿ ಬೀಸಿತು. ನಾವಿಕರು ಭಯದಿಂದ ಕಂಗಾಲಾದರು. ಅವರು ತಮ್ಮ ತಮ್ಮ ದೇವರುಗಳಿಗೆ ಪ್ರಾರ್ಥಿಸುತ್ತಾ, ‘ಯಾಕೆ ಹೀಗಾಗುತ್ತಿದೆ?’ ಅಂತ ಮಾತಾಡಿಕೊಂಡರು. ಕೊನೆಗೆ ಯೋನ ‘ಇದಕ್ಕೆಲ್ಲಾ ನಾನೇ ಕಾರಣ. ಯೆಹೋವನು ಹೇಳಿದ ಕೆಲಸವನ್ನು ಮಾಡದೆ ತಪ್ಪಿಸಿಕೊಂಡು ಓಡಿಹೋಗುತ್ತಿದ್ದೇನೆ. ನೀವು ನನ್ನನ್ನ ಸಮುದ್ರದಲ್ಲಿ ಬಿಸಾಕಿ. ಆಗ ಬಿರುಗಾಳಿ ನಿಲ್ಲುತ್ತದೆ’ ಅಂದ. ಯೋನನನ್ನು ನೀರಿಗೆ ಹಾಕಲು ನಾವಿಕರಿಗೆ ಇಷ್ಟ ಇರಲಿಲ್ಲ. ಆದರೆ ಯೋನ ಅವರನ್ನು ಒತ್ತಾಯ ಮಾಡಿದ. ಕೊನೆಗೆ ಅವರು ಅವನನ್ನು ಸಮುದ್ರಕ್ಕೆ ಹಾಕಿದರು. ಆಗ ಬಿರುಗಾಳಿ ನಿಂತು ಹೋಯಿತು.

ನೀರಿಗೆ ಬಿದ್ದ ಯೋನ ತಾನು ಖಂಡಿತ ಸಾಯುತ್ತೀನಿ ಅಂತ ಅಂದುಕೊಂಡ. ನೀರಿನಲ್ಲಿ ಮುಳುಗುತ್ತಿರುವಾಗ ಯೆಹೋವನಿಗೆ ಪ್ರಾರ್ಥಿಸಿದ. ಆಗ ಯೆಹೋವನು ಒಂದು ದೊಡ್ಡ ಮೀನನ್ನು ಕಳುಹಿಸಿದನು. ಅದು ಅವನನ್ನು ನುಂಗಿತು. ಆದರೆ ಸಾಯಿಸಲಿಲ್ಲ. ಮೀನಿನ ಹೊಟ್ಟೆಯಲ್ಲಿದ್ದ ಯೋನ ಯೆಹೋವನಿಗೆ ‘ಇನ್ನು ಮುಂದೆ ನಾನು ಯಾವಾಗಲೂ ನಿನ್ನ ಮಾತು ಕೇಳುತ್ತೀನಿ’ ಎಂದು ಪ್ರಾರ್ಥಿಸಿದ. ಯೆಹೋವನು ಮೂರು ದಿನ ಯೋನನನ್ನು ಮೀನಿನ ಹೊಟ್ಟೆಯಲ್ಲಿ ಸುರಕ್ಷಿತವಾಗಿಟ್ಟನು. ನಂತರ ಮೀನು ಅವನನ್ನು ಒಣನೆಲದಲ್ಲಿ ಕಕ್ಕುವಂತೆ ಮಾಡಿದನು.

ಯೆಹೋವನು ಯೋನನನ್ನು ಕಾಪಾಡಿದ. ಹಾಗಂತ ಯೋನ ನಿನೆವೆಗೆ ಹೋಗಬೇಕಾಗಿ ಇರಲಿಲ್ವಾ? ಯೆಹೋವನು ಯೋನನಿಗೆ ನಿನೆವೆಗೆ ಹೋಗಲು ಮತ್ತೆ ಹೇಳಿದನು. ಈ ಸಾರಿ ಯೋನ ವಿಧೇಯನಾದ. ಅವನು ಅಲ್ಲಿಗೆ ಹೋಗಿ ಆ ಕೆಟ್ಟ ಜನರಿಗೆ ‘ಇನ್ನು 40 ದಿನದಲ್ಲಿ ನಿನೆವೆ ನಾಶ ಆಗುತ್ತೆ’ ಎಂದ. ನಿನೆವೆಯ ಜನರು ಬದಲಾಗುತ್ತಾರೆ ಅಂತ ಯೋನ ಅಂದುಕೊಂಡಿರಲಿಲ್ಲ. ಆದರೆ ಅವರು ಬದಲಾದರು! ನಿನೆವೆಯ ರಾಜ, ‘ದೇವರಿಗೆ ಪ್ರಾರ್ಥಿಸಿ, ಕೆಟ್ಟತನವನ್ನು ಬಿಟ್ಟುಬಿಡಿ. ಆಗ ಒಂದುವೇಳೆ ಅವನು ನಮ್ಮನ್ನು ನಾಶಮಾಡದೇ ಇರಬಹುದು’ ಎಂದು ಜನರಿಗೆ ಹೇಳಿದ. ಜನರು ಪಶ್ಚಾತ್ತಾಪ ಪಟ್ಟಿದ್ದರಿಂದ ಯೆಹೋವನು ನಿನೆವೆಯನ್ನು ನಾಶಮಾಡಲಿಲ್ಲ.

ಯೋನ ನಿನೆವೆಗೆ ಹೋಗುತ್ತಿದ್ದಾನೆ

ಆಗ ಯೋನನಿಗೆ ತುಂಬ ಸಿಟ್ಟು ಬಂತು. ಯೆಹೋವನು ಯೋನನಿಗೆ ತಾಳ್ಮೆ ಮತ್ತು ಕನಿಕರ ತೋರಿಸಿದ್ದನು. ಆದರೆ ಯೋನ ನಿನೆವೆಯ ಜನರಿಗೆ ಕನಿಕರ ತೋರಿಸಲಿಲ್ಲ. ಬದಲಿಗೆ ಊರ ಹೊರಗೆ ಹೋಗಿ ಸೋರೆಬಳ್ಳಿಯ ಕೆಳಗೆ ಕೂತುಕೊಂಡು ಪಟ್ಟಣ ನಾಶ ಆಗುತ್ತಾ ಅಂತ ನೋಡುತ್ತಿದ್ದ. ಆ ಸೋರೆಬಳ್ಳಿ ಒಣಗಿಹೋಯಿತು. ಯೋನನ ಕೋಪ ನೆತ್ತಿಗೇರಿತು. ಆಗ ಯೆಹೋವನು ಯೋನನಿಗೆ ‘ನಿನಗೆ ಈ ಬಳ್ಳಿಯ ಮೇಲೆ ಇರುವಷ್ಟು ಕನಿಕರ ಆ ಜನರ ಮೇಲೆ ಇಲ್ಲ. ನಾನು ಅವರಿಗೆ ಕನಿಕರ ತೋರಿಸಿದ್ದೀನಿ. ಆದ್ದರಿಂದ ಅವರು ನಾಶವಾಗಲಿಲ್ಲ’ ಅಂದನು. ಇದರಿಂದ ಏನು ಗೊತ್ತಾಗುತ್ತೆ? ಬಳ್ಳಿಗಿಂತ ನಿನೆವೆಯ ಜನರು ತುಂಬ ಪ್ರಾಮುಖ್ಯವಾಗಿದ್ದರು.

“ಯಾರೂ ನಾಶ ಆಗಬಾರದು ಅಂತ ದೇವರು ತಾಳ್ಮೆಯಿಂದ ಕಾಯ್ತಾ ಇದ್ದಾನೆ. ಎಲ್ರಿಗೂ ತಮ್ಮ ತಪ್ಪನ್ನ ತಿದ್ಕೊಳ್ಳೋಕೆ ಅವಕಾಶ ಸಿಗಬೇಕು ಅನ್ನೋದೇ ದೇವರ ಆಸೆ.”—2 ಪೇತ್ರ 3:9

ಪ್ರಶ್ನೆಗಳು: ಯೆಹೋವನು ಯೋನನಿಗೆ ಯಾವ ಪಾಠಗಳನ್ನು ಕಲಿಸಿದನು? ಯೋನನಿಗೆ ಆದ ವಿಷಯದಿಂದ ನಾವೇನು ಕಲಿಯಬಹುದು?

ಯೋನ 1:1–4:11

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ