ಜ್ಞಾಪಕಾಚರಣೆಯ ಮರುಜ್ಞಾಪನಗಳು
ಈ ವರ್ಷದ ಜ್ಞಾಪಕಾಚರಣೆಯು ಗುರುವಾರ ಏಪ್ರಿಲ್ 1ರಂದು ಆಚರಿಸಲ್ಪಡುತ್ತದೆ. ಹಿರಿಯರು ಈ ಕೆಳಕಂಡ ವಿಷಯಗಳಿಗೆ ಗಮನವನ್ನು ಕೊಡಬೇಕು:
◼ ಕೂಟಕ್ಕಾಗಿ ಸಮಯವನ್ನು ನಿಗದಿಪಡಿಸುವಾಗ, ಸೂರ್ಯಾಸ್ತಮಾನಕ್ಕಿಂತ ಮುಂಚೆ ಕುರುಹುಗಳು ದಾಟಿಸಲ್ಪಡಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಿರಿ.
◼ ಭಾಷಣಕರ್ತನನ್ನು ಸೇರಿಸಿ, ಪ್ರತಿಯೊಬ್ಬರಿಗೂ ಆಚರಣೆಯ ನಿಷ್ಕೃಷ್ಟ ಸಮಯ ಮತ್ತು ಸ್ಥಳದ ಕುರಿತು ತಿಳಿಸಬೇಕು.
◼ ಸರಿಯಾದ ರೀತಿಯ ರೊಟ್ಟಿ ಮತ್ತು ದ್ರಾಕ್ಷಾರಸವನ್ನು ಸಿದ್ಧಪಡಿಸಿರಬೇಕು.—ಮಾರ್ಚ್ 1, 1985ರ ಕಾವಲಿನಬುರುಜು ಪತ್ರಿಕೆಯ 21ನೆಯ ಪುಟವನ್ನು ನೋಡಿರಿ.
◼ ತಟ್ಟೆಗಳು, ಲೋಟಗಳು, ಮತ್ತು ಮೇಜು ಹಾಗೂ ತಕ್ಕ ಮೇಜಿನ ಬಟ್ಟೆಯನ್ನು ಸಭಾಗೃಹಕ್ಕೆ ತಂದು, ಅದರ ಸ್ಥಾನದಲ್ಲಿ ಮುಂಚೆಯೇ ಅಲ್ಲಿಡಬೇಕು.
◼ ರಾಜ್ಯ ಸಭಾಗೃಹ ಅಥವಾ ಬೇರೆ ಸ್ಥಳದಲ್ಲಿ ಕೂಟವನ್ನು ನಡೆಸುವುದಾದರೆ ಅದನ್ನು ಬಹಳ ಮುಂಚಿತವಾಗಿಯೇ ಚೆನ್ನಾಗಿ ಶುಚಿಮಾಡಬೇಕು.
◼ ಅಟೆಂಡೆಂಟರನ್ನು ಮತ್ತು ಕುರುಹುಗಳನ್ನು ದಾಟಿಸುವವರನ್ನು ಆಯ್ಕೆಮಾಡಿ, ಅವರ ಕೆಲಸಗಳು ಮತ್ತು ಸೂಕ್ತವಾದ ಕಾರ್ಯವಿಧಾನವನ್ನು ಮುಂಚಿತವಾಗಿಯೇ ಅವರಿಗೆ ಹೇಳಬೇಕು.
◼ ಅಶಕ್ತರೂ ಅಲ್ಲಿ ಉಪಸ್ಥಿತರಿರಲು ಅಸಮರ್ಥರೂ ಆಗಿರುವ ಅಭಿಷಿಕ್ತ ಜನರಿಗೆ ಕುರುಹುಗಳನ್ನು ಕೊಡಲು ಏರ್ಪಾಡುಗಳನ್ನು ಮಾಡಬೇಕು.
◼ ಒಂದಕ್ಕಿಂತ ಹೆಚ್ಚಿನ ಸಭೆಗಳು ಒಂದೇ ಸಭಾಗೃಹವನ್ನು ಉಪಯೋಗಿಸುವಲ್ಲಿ, ಸಭೆಗಳ ಮಧ್ಯೆ ಒಳ್ಳೆಯ ಸಹಕಾರವಿರಬೇಕು. ಇದು ಲಾಬಿ ಅಥವಾ ಪ್ರವೇಶದ್ವಾರದಲ್ಲಿ, ಫುಟ್ಪಾತ್ಗಳಲ್ಲಿ ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ಅನಾವಶ್ಯಕ ಜನಸಂದಣಿಯನ್ನು ತಪ್ಪಿಸುವುದು.