ಪಾದಟಿಪ್ಪಣಿ
c ದ ವಾಚ್ಟವರ್, ನವೆಂಬರ್ 1 ಮತ್ತು 15, ಡಿಸೆಂಬರ್ 1, 1962; ನವೆಂಬರ್ 1, 1990; ಫೆಬ್ರವರಿ 1, 1993; ಜುಲೈ 1, 1994ನ್ನು ನೋಡಿ.
ಸ್ವಾರಸ್ಯಕರವಾಗಿ, ರೋಮಾಪುರ 13ನೆಯ ಅಧ್ಯಾಯದ ಕುರಿತಾದ ತನ್ನ ವ್ಯಾಖ್ಯಾನದಲ್ಲಿ, ಪ್ರೊಫೆಸರ್ ಎಫ್. ಎಫ್. ಬ್ರೂಸ್ ಬರೆಯುವುದು: “ಅಪೊಸ್ತಲರ ಬರಹಗಳ ಸಾಮಾನ್ಯ ಪೂರ್ವಾಪರದಿಂದಿರುವಂತೆಯೆ, ರೋಮಾಪುರ 13ನೆಯ ಅಧ್ಯಾಯದ ನೇರವಾದ ಪೂರ್ವಾಪರದಿಂದ ಸ್ಪಷ್ಟವಾಗಿರುವ ವಿಷಯವೇನೆಂದರೆ, ರಾಜ್ಯವು ಅದು ದೈವಿಕವಾಗಿ ಸ್ಥಾಪಿಸಲ್ಪಟ್ಟಿರುವ ಉದ್ದೇಶಗಳ ಪರಿಮಿತಿಗಳೊಳಗೆ ಮಾತ್ರ, ನ್ಯಾಯವಾಗಿ ವಿಧೇಯತೆಯನ್ನು ಕೇಳಿಕೊಳ್ಳಬಲ್ಲದು—ವಿಶೇಷವಾಗಿ, ರಾಜ್ಯವು ದೇವರಿಗೆ ಮಾತ್ರ ಸಲ್ಲತಕ್ಕ ನಿಷ್ಠೆಯನ್ನು ತಗಾದೆ ಮಾಡುವಾಗ, ಅದರ ವಿರುದ್ಧವಾಗಿ ಪ್ರತಿಭಟಿಸಬಹುದು ಮಾತ್ರವಲ್ಲ ಪ್ರತಿಭಟಿಸಲೇಬೇಕು.”