-
ನಿಮ್ಮ ಸಹೋದರನನ್ನು ನೀವು ಸಂಪಾದಿಸಿಕೊಳ್ಳುವ ಸಂಭವವಿದೆಕಾವಲಿನಬುರುಜು—1999 | ಅಕ್ಟೋಬರ್ 15
-
-
ಪ್ರೌಢ ವ್ಯಕ್ತಿಗಳ ಸಹಾಯವನ್ನು ಪಡೆದುಕೊಳ್ಳಿರಿ
12, 13. (ಎ) ತಪ್ಪುಗಳೊಂದಿಗೆ ವ್ಯವಹರಿಸುವುದರಲ್ಲಿ ಯಾವ ಎರಡನೆಯ ಹೆಜ್ಜೆಯನ್ನು ಯೇಸು ತಿಳಿಯಪಡಿಸಿದನು? (ಬಿ) ಈ ಹೆಜ್ಜೆಯನ್ನು ತೆಗೆದುಕೊಳ್ಳುವಾಗ ಯಾವ ಮುನ್ನೆಚ್ಚರಿಕೆಗಳನ್ನು ವಹಿಸಬೇಕು?
12 ಗಂಭೀರವಾದ ಒಂದು ತಪ್ಪನ್ನು ಮಾಡಿರುವ ದೋಷಾಪರಾಧವು ನಿಮ್ಮ ಮೇಲಿರುವಲ್ಲಿ, ಇತರರು ನಿಮಗೆ ಸ್ವಲ್ಪ ಸಹಾಯವನ್ನು ಮಾಡಲು ಪ್ರಯತ್ನಿಸಿ, ತದನಂತರ ಅವರು ತಮ್ಮ ಪ್ರಯತ್ನಗಳನ್ನು ನಿಲ್ಲಿಸಿಬಿಡುವಂತೆ ನೀವು ಬಯಸುತ್ತೀರೊ? ಖಂಡಿತವಾಗಿಯೂ ಇಲ್ಲ. ಅದೇ ರೀತಿಯಲ್ಲಿ, ನಿಮ್ಮ ಸಹೋದರನನ್ನು ಸಂಪಾದಿಸಿಕೊಳ್ಳಲಿಕ್ಕಾಗಿ, ದೇವರನ್ನು ಸ್ವೀಕಾರಯೋಗ್ಯವಾಗಿ ಆರಾಧಿಸುವುದರಲ್ಲಿ ನಿಮ್ಮೊಂದಿಗೆ ಹಾಗೂ ಇತರರೊಂದಿಗೆ ಅವನನ್ನು ಜೊತೆಯಾಗಿರಿಸಿಕೊಳ್ಳಲಿಕ್ಕಾಗಿ ನೀವು ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಬೇಕು. ಆದರೆ ಮೊದಲ ಹೆಜ್ಜೆಯನ್ನು ತೆಗೆದುಕೊಂಡ ಬಳಿಕ ನೀವು ಪ್ರಯತ್ನವನ್ನು ಬಿಟ್ಟುಬಿಡಬಾರದು ಎಂದು ಯೇಸು ತೋರಿಸಿದನು. ಯೇಸು ಎರಡನೆಯ ಹೆಜ್ಜೆಯನ್ನು ತಿಳಿಯಪಡಿಸಿದನು: “ಅವನು ಕೇಳದೆಹೋದರೆ ಎರಡು ಮೂರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತು ಸ್ಥಾಪನೆಯಾಗುವ ಹಾಗೆ ಇನ್ನೂ ಒಬ್ಬಿಬ್ಬರನ್ನು ನಿನ್ನ ಸಂಗಡ ಕರಕೊಂಡುಹೋಗು.”
13 “ಎರಡು ಮೂರು ಸಾಕ್ಷಿ”ಗಳನ್ನು ಕರೆದುಕೊಂಡುಹೋಗುವಂತೆ ಅವನು ಹೇಳಿದನು. ಮೊದಲ ಹೆಜ್ಜೆಯನ್ನು ತೆಗೆದುಕೊಂಡ ಬಳಿಕ, ನೀವು ಈ ಸಮಸ್ಯೆಯನ್ನು ಇನ್ನಿತರರೊಂದಿಗೆ ಚರ್ಚಿಸುವ, ಒಬ್ಬ ಸಂಚರಣ ಮೇಲ್ವಿಚಾರಕರನ್ನು ಸಂಪರ್ಕಿಸುವ, ಅಥವಾ ಇದರ ಬಗ್ಗೆ ಬೇರೆ ಸಹೋದರರಿಗೆ ಪತ್ರವನ್ನು ಬರೆಯುವ ಸ್ವಾತಂತ್ರ್ಯ ನಿಮಗಿದೆ ಎಂದು ಅವನು ಹೇಳಲಿಲ್ಲ. ಮಾಡಲ್ಪಟ್ಟಿರುವ ತಪ್ಪಿನ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿರುವುದಾದರೂ, ಆ ತಪ್ಪು ಇನ್ನೂ ಕೂಡ ಸಂಪೂರ್ಣವಾಗಿ ರುಜುವಾಗಿರುವುದಿಲ್ಲ. ಮಿಥ್ಯಾಪವಾದವಾಗಿ ಪರಿಣಮಿಸಸಾಧ್ಯವಿರುವ ತಪ್ಪು ಮಾಹಿತಿಯನ್ನು ಹಬ್ಬಿಸಲು ನೀವು ಬಯಸಲಾರಿರಿ. (ಜ್ಞಾನೋಕ್ತಿ 16:28; 18:8) ಆದರೆ ನಿಮ್ಮೊಂದಿಗೆ ಒಬ್ಬರು ಅಥವಾ ಇಬ್ಬರು ವ್ಯಕ್ತಿಗಳನ್ನು ಕರೆದುಕೊಂಡುಹೋಗುವಂತೆ ಯೇಸು ಹೇಳಿದನು. ಏಕೆ? ಮತ್ತು ಅವರು ಯಾರಾಗಿರಸಾಧ್ಯವಿದೆ?
14. ಎರಡನೆಯ ಹೆಜ್ಜೆಯಲ್ಲಿ ಯಾರನ್ನು ನಾವು ನಮ್ಮೊಂದಿಗೆ ಕರೆದುಕೊಂಡುಹೋಗಬಹುದು?
14 ಒಂದು ತಪ್ಪು ಮಾಡಲ್ಪಟ್ಟಿದೆ ಎಂಬುದನ್ನು ನಿಮ್ಮ ಸಹೋದರನಿಗೆ ಮನಗಾಣಿಸುವ ಮೂಲಕ ಮತ್ತು ನಿಮ್ಮೊಂದಿಗೆ ಹಾಗೂ ದೇವರೊಂದಿಗೆ ಒಳ್ಳೆಯ ಸಂಬಂಧವನ್ನಿರಿಸಿಕೊಳ್ಳಲಿಕ್ಕಾಗಿ ಪಶ್ಚಾತ್ತಾಪಪಡುವಂತೆ ಅವನನ್ನು ಪ್ರಚೋದಿಸುವ ಮೂಲಕ, ನೀವು ನಿಮ್ಮ ಸಹೋದರನನ್ನು ಸಂಪಾದಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ. ಈ ಗುರಿಯನ್ನು ಸಾಧಿಸಲಿಕ್ಕಾಗಿ, ಮಾಡಿದ ತಪ್ಪಿಗೆ ‘ಇಬ್ಬರು ಮೂವರು’ ಮಂದಿ ಸಾಕ್ಷಿಗಳಿರುವಲ್ಲಿ ಸನ್ನಿವೇಶವು ಅನುಕೂಲಕರವಾಗಿರುವುದು. ಆ ಘಟನೆಯು ಸಂಭವಿಸಿದ್ದನ್ನು ಅವರು ಕಣ್ಣಾರೆ ನೋಡಿರಬಹುದು, ಅಥವಾ ಒಂದು ವ್ಯಾಪಾರ ವ್ಯವಹಾರದಲ್ಲಿ ಏನು ಮಾಡಲಾಗಿತ್ತು (ಇಲ್ಲವೆ ಏನನ್ನು ಮಾಡಿರಲಿಲ್ಲ) ಎಂಬುದರ ಕುರಿತು ಸೂಕ್ತವಾದ ಮಾಹಿತಿಯು ಅವರ ಬಳಿ ಇರಬಹುದು. ಒಂದುವೇಳೆ ಇಂತಹ ಸಾಕ್ಷಿಗಳು ಲಭ್ಯವಿರದಿದ್ದಲ್ಲಿ, ಯಾರನ್ನು ಸಾಕ್ಷಿಗಳಾಗಿ ಕರೆತರಲಾಗುತ್ತದೋ ಅವರು, ವಾಗ್ವಾದಕ್ಕೊಳಗಾಗಿರುವ ವಿಷಯದ ಬಗ್ಗೆ ಅನುಭವವಿದ್ದು, ಏನು ಸಂಭವಿಸಿತೋ ಅದು ನಿಜವಾಗಿಯೂ ತಪ್ಪಾಗಿತ್ತು ಎಂಬುದನ್ನು ತೀರ್ಮಾನಿಸಲು ಶಕ್ತರಾಗಿರಬಹುದು. ಅಷ್ಟುಮಾತ್ರವಲ್ಲ, ಮುಂದೆ ಯಾವಾಗಲಾದರೂ ಅಗತ್ಯ ಬೀಳುವಲ್ಲಿ, ಈ ಮುಂಚೆ ಯಾವ ವಾಸ್ತವಾಂಶಗಳನ್ನು ನೀವು ಪ್ರಸ್ತುತಪಡಿಸಿದಿರಿ ಮತ್ತು ತಪ್ಪಿತಸ್ಥನಿಗೆ ಸಹಾಯ ಮಾಡಲು ನೀವು ಎಷ್ಟು ಪ್ರಯತ್ನವನ್ನು ಮಾಡಿದಿರಿ ಎಂಬುದನ್ನು ಸಮರ್ಥಿಸುತ್ತಾ, ನಡೆದ ಸಂಗತಿಯನ್ನು ತಿಳಿಯಪಡಿಸಲು ನೀವು ಈ ವ್ಯಕ್ತಿಗಳನ್ನು ಸಾಕ್ಷಿಗಳಾಗಿ ಉಪಯೋಗಿಸಸಾಧ್ಯವಿದೆ. (ಅರಣ್ಯಕಾಂಡ 35:30; ಧರ್ಮೋಪದೇಶಕಾಂಡ 17:6) ಆದುದರಿಂದ, ಅವರು ಮೂಕ ಪ್ರೇಕ್ಷಕರಾಗಿರುವುದಿಲ್ಲ; ಆದರೂ, ಅವರು ಅಲ್ಲಿ ಉಪಸ್ಥಿತರಿರುವುದು, ನಿಮ್ಮ ಹಾಗೂ ತಮ್ಮ ಸಹೋದರನನ್ನು ಸಂಪಾದಿಸಿಕೊಳ್ಳಲು ಸಹಾಯ ಮಾಡಲಿಕ್ಕಾಗಿಯೇ.
15. ನಾವು ಎರಡನೆಯ ಹೆಜ್ಜೆಯನ್ನು ತೆಗೆದುಕೊಳ್ಳಬೇಕಾಗಿರುವಲ್ಲಿ, ಕ್ರೈಸ್ತ ಹಿರಿಯರ ನೆರವನ್ನು ಪಡೆದುಕೊಳ್ಳುವುದು ಏಕೆ ಸಹಾಯಕರವಾಗಿ ಪರಿಣಮಿಸಬಹುದು?
15 ನೀವು ಸಾಕ್ಷಿಗಳಾಗಿ ತರುವಂತಹ ಜನರು, ಸಭೆಯ ಹಿರಿಯರೇ ಆಗಿರಬೇಕು ಎಂದು ನೀವು ಭಾವಿಸುವ ಅಗತ್ಯವಿಲ್ಲ. ಆದರೂ, ಹಿರಿಯರಾಗಿ ಸೇವೆಸಲ್ಲಿಸುತ್ತಿರುವ ಪ್ರೌಢ ವ್ಯಕ್ತಿಗಳು, ತಮ್ಮ ಆತ್ಮಿಕ ಅರ್ಹತೆಗಳ ಕಾರಣ ನಿಮಗೆ ಸಹಾಯ ಮಾಡಲು ಶಕ್ತರಾಗಿರಬಹುದು. ಅಂತಹ ಹಿರಿಯರು “ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ” ಇದ್ದಾರೆ. (ಯೆಶಾಯ 32:1, 2) ಸಹೋದರ ಸಹೋದರಿಯರೊಂದಿಗೆ ತರ್ಕಿಸುವುದರಲ್ಲಿ ಮತ್ತು ಅವರಿಗೆ ತಿದ್ದುಪಾಟು ನೀಡುವುದರಲ್ಲಿ ಅವರಿಗೆ ಅನುಭವವಿದೆ. ಮತ್ತು ಆ ತಪ್ಪಿತಸ್ಥನು, ಇಂತಹ “ಪುರುಷರ ರೂಪದಲ್ಲಿ ದಾನ”ಗಳಲ್ಲಿ ದೃಢಭರವಸೆಯಿಡಲು ಸಕಾರಣವಿದೆ.c (ಎಫೆಸ 4:8, 11, 12) ಇಂತಹ ಪ್ರೌಢ ವ್ಯಕ್ತಿಗಳ ಮುಂದೆ ಈ ಘಟನೆಯ ಬಗ್ಗೆ ಮಾತಾಡುವುದು ಮತ್ತು ಅವರೊಂದಿಗೆ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದು, ಹೊಸ ಸನ್ನಿವೇಶವನ್ನು ಉಂಟುಮಾಡಬಲ್ಲದು ಹಾಗೂ ಬಗೆಹರಿಸಲು ಅಸಾಧ್ಯವಾಗಿ ಕಂಡುಬರುವ ಸಮಸ್ಯೆಯನ್ನು ಬಗೆಹರಿಸಬಲ್ಲದು.—ಹೋಲಿಸಿರಿ ಯಾಕೋಬ 5:14, 15.
-
-
ನಿಮ್ಮ ಸಹೋದರನನ್ನು ನೀವು ಸಂಪಾದಿಸಿಕೊಳ್ಳುವ ಸಂಭವವಿದೆಕಾವಲಿನಬುರುಜು—1999 | ಅಕ್ಟೋಬರ್ 15
-
-
c ಒಬ್ಬ ಬೈಬಲ್ ವಿದ್ವಾಂಸನು ಹೇಳಿಕೆ ನೀಡಿದ್ದು: “ಕೆಲವೊಮ್ಮೆ ಏನಾಗುತ್ತದೆಂದರೆ, ಒಬ್ಬ ತಪ್ಪಿತಸ್ಥನು ಒಬ್ಬ ವ್ಯಕ್ತಿಯ—ವಿಶೇಷವಾಗಿ ತಪ್ಪಿತಸ್ಥನಿಗೆ ಈ ವ್ಯಕ್ತಿಯೊಂದಿಗೆ ಈಗಾಗಲೇ ಮನಸ್ತಾಪವಿದ್ದಲ್ಲಿ—ಸಲಹೆಗಿಂತಲೂ, ಇಬ್ಬರು ಅಥವಾ ಮೂವರು ವ್ಯಕ್ತಿಗಳ (ವಿಶೇಷವಾಗಿ ಇವರು ಗೌರವಾರ್ಹರಾದ ವ್ಯಕ್ತಿಗಳಾಗಿರುವಲ್ಲಿ) ಸಲಹೆಯನ್ನು ಪರಿಗಣಿಸಲು ಮನಃಪೂರ್ವಕವಾಗಿ ಸಿದ್ಧನಿರುತ್ತಾನೆ.”
-