ಭಾನುವಾರ, ಆಗಸ್ಟ್ 31
ತಿಳುವಳಿಕೆ ಇರುವವರು ಅರ್ಥ ಮಾಡ್ಕೊಳ್ತಾರೆ.—ದಾನಿ. 12:10.
ಬೈಬಲಲ್ಲಿರೋ ಭವಿಷ್ಯವಾಣಿಗಳನ್ನ ಅರ್ಥ ಮಾಡ್ಕೊಳ್ಳೋಕೆ ನಮಗೆ ಯೆಹೋವ ದೇವರ ಸಹಾಯ ಬೇಕು. ಒಂದು ಉದಾಹರಣೆ ನೋಡಿ. ನಿಮಗೆ ಗೊತ್ತಿಲ್ಲದಿರೋ ಜಾಗಕ್ಕೆ ಹೋಗ್ತಾ ಇದ್ದೀರ ಅಂತ ಅಂದ್ಕೊಳ್ಳಿ. ನಿಮ್ಮ ಜೊತೆ ನಿಮ್ಮ ಫ್ರೆಂಡೂ ಇದ್ದಾರೆ. ಅವ್ರಿಗೆ ಆ ಜಾಗದ ಬಗ್ಗೆ ಚೆನ್ನಾಗಿ ಗೊತ್ತು. ಯಾವ ದಾರಿ ಎಲ್ಲಿಗೆ ಹೋಗುತ್ತೆ ಅಂತಾನೂ ಅವ್ರಿಗೆ ಗೊತ್ತು. ಆಗ ನಿಮಗೆ ‘ಇವರು ನನ್ನ ಜೊತೆ ಬಂದಿದ್ದು ಒಳ್ಳೇದಾಯ್ತಪ್ಪಾ’ ಅಂತ ಅನಿಸುತ್ತೆ ಅಲ್ವಾ? ಯೆಹೋವ ದೇವರು ಈ ಫ್ರೆಂಡ್ ತರಾನೇ ಇದ್ದಾನೆ. ನಾವು ಯಾವ ಸಮಯದಲ್ಲಿ ಜೀವಿಸ್ತಾ ಇದ್ದೀವಿ, ಮುಂದೆ ಏನಾಗುತ್ತೆ ಅಂತ ನಮಗಿಂತ ಚೆನ್ನಾಗಿ ಆತನಿಗೆ ಗೊತ್ತು. ಹಾಗಾಗಿ ಭವಿಷ್ಯವಾಣಿಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ದೀನತೆಯಿಂದ ಆತನ ಸಹಾಯ ಕೇಳಬೇಕು. (ದಾನಿ. 2:28; 2 ಪೇತ್ರ 1:19, 20) ಅಪ್ಪಅಮ್ಮಂದಿರಿಗೆ ತಮ್ಮ ಮಕ್ಕಳ ಭವಿಷ್ಯ ಚೆನ್ನಾಗಿರಬೇಕು ಅನ್ನೋ ಆಸೆ ಇರುತ್ತೆ. ಅದೇ ತರ ಯೆಹೋವ ದೇವರೂ ತನ್ನೆಲ್ಲಾ ಮಕ್ಕಳ ಭವಿಷ್ಯ ಚೆನ್ನಾಗಿರಬೇಕು ಅಂತ ಇಷ್ಟಪಡ್ತಾನೆ. (ಯೆರೆ. 29:11) ಆದ್ರೆ ಅಪ್ಪಅಮ್ಮಂದಿರಿಗೆ ಇಲ್ಲದಿರೋ ಒಂದು ಸಾಮರ್ಥ್ಯ ಯೆಹೋವನಿಗೆ ಇದೆ. ಅದೇನಂದ್ರೆ ಮುಂದೆ ಏನಾಗುತ್ತೆ ಅಂತ ಆತನಿಗೆ ಸ್ಪಷ್ಟವಾಗಿ ಗೊತ್ತು. ನಾವು ಅದ್ರ ಬಗ್ಗೆ ತಿಳ್ಕೊಬೇಕು ಅಂತಾನೇ ಅದನ್ನೆಲ್ಲ ಬೈಬಲಲ್ಲಿ ಎಷ್ಟೋ ವರ್ಷಗಳ ಮುಂಚೆನೇ ಬರೆಸಿಟ್ಟಿದ್ದಾನೆ.—ಯೆಶಾ. 46:10. w23.08 8 ¶3-4
ಸೋಮವಾರ, ಸೆಪ್ಟೆಂಬರ್ 1
ನಮ್ಮ ಮೇಲೆ ಸೂರ್ಯ ಮೂಡ್ತಾನೆ.—ಲೂಕ 1:78.
ಯೆಹೋವ ನಮ್ಮೆಲ್ಲಾ ಕಷ್ಟಗಳನ್ನ ತೆಗೆದುಹಾಕೋ ಶಕ್ತಿಯನ್ನ ಯೇಸುಗೆ ಕೊಟ್ಟಿದ್ದಾನೆ. ಕೆಲವು ಸಮಸ್ಯೆಗಳನ್ನ ನಮ್ಮಿಂದ ಸರಿಮಾಡೋಕೆ ಆಗಲ್ಲ. ಆದ್ರೆ ಅಂಥ ಸಮಸ್ಯೆಗಳನ್ನ ತನ್ನಿಂದ ಸರಿಮಾಡೋಕೆ ಆಗುತ್ತೆ ಅಂತ ಯೇಸು ತೋರಿಸಿದ್ದಾನೆ. ಉದಾಹರಣೆಗೆ, ನಮ್ಮಲ್ಲಿ ಪಾಪ ಇರೋದ್ರಿಂದ ಕಾಯಿಲೆ ಬರುತ್ತೆ, ಇದ್ರಿಂದ ಸಾಯ್ತಾ ಇದ್ದೀವಿ. ಆದ್ರೆ ಇದನ್ನೆಲ್ಲಾ ತೆಗೆದುಹಾಕೋ ಶಕ್ತಿ ಯೇಸುಗಿದೆ. (ಮತ್ತಾ. 9:1-6; ರೋಮ. 5:12, 18, 19) ಆತನಿಗೆ ‘ಜನ್ರ ಎಲ್ಲ ರೀತಿಯ ರೋಗಗಳನ್ನ, ಕಾಯಿಲೆಗಳನ್ನ ವಾಸಿಮಾಡೋಕೆ’ ಆಗುತ್ತೆ. ಸತ್ತವರನ್ನೂ ಮತ್ತೆ ಬದುಕಿಸೋಕೆ ಆಗುತ್ತೆ. (ಮತ್ತಾ. 4:23; ಯೋಹಾ. 11:43, 44) ಯೇಸು ಅದ್ಭುತ ಮಾಡಿ ದೊಡ್ಡದೊಡ್ಡ ಬಿರುಗಾಳಿಯನ್ನ ನಿಲ್ಲಿಸಿದ್ದಾನೆ. ಕೆಟ್ಟ ದೇವದೂತರನ್ನ ಸೋಲಿಸಿದ್ದಾನೆ. (ಮಾರ್ಕ 4:37-39; ಲೂಕ 8:2) ಯೆಹೋವ ಕೊಟ್ಟಿರೋ ಶಕ್ತಿಯಿಂದ ಯೇಸು ಮುಂದೆ ಎಲ್ಲಾ ಸಮಸ್ಯೆಗಳನ್ನ ತೆಗೆದುಹಾಕ್ತಾನೆ ಅಂತ ತಿಳ್ಕೊಂಡಾಗ ನಮಗೆ ಎಷ್ಟು ಖುಷಿಯಾಗುತ್ತೆ ಅಲ್ವಾ! ತನ್ನ ಆಳ್ವಿಕೆಯಲ್ಲಿ ಏನೆಲ್ಲ ಆಶೀರ್ವಾದ ಸಿಗುತ್ತೆ ಅಂತ ಯೆಹೋವ ಹೇಳಿದ್ದಾನೋ ಅದೆಲ್ಲ ನಿಜ ಆಗುತ್ತೆ ಅನ್ನೋ ಗ್ಯಾರಂಟಿ ನಮಗೆ ಸಿಗುತ್ತೆ. ಯೇಸು ಭೂಮಿಯಲ್ಲಿ ಇದ್ದಾಗ ಆತನು ಮಾಡಿದ ಅದ್ಭುತಗಳಿಂದ ಸ್ವಲ್ಪ ಜನ್ರಿಗೆ ಸಹಾಯ ಆಯ್ತು. ಆದ್ರೆ ಆತನು ದೇವರ ಸರ್ಕಾರದಲ್ಲಿ ರಾಜನಾಗಿ ಆಳುವಾಗ ಲೋಕದಲ್ಲಿರೋ ಎಲ್ರಿಗೂ ಸಹಾಯ ಮಾಡ್ತಾನೆ. w23.04 3 ¶5-7
ಮಂಗಳವಾರ, ಸೆಪ್ಟೆಂಬರ್ 2
ಪವಿತ್ರಶಕ್ತಿ ಎಲ್ಲ ವಿಷ್ಯಗಳನ್ನ, ಅದ್ರಲ್ಲೂ ದೇವರ ಬಗ್ಗೆ ಇರೋ ಗಾಢವಾದ ವಿಷ್ಯಗಳನ್ನ ಹೇಳುತ್ತೆ.—1 ಕೊರಿಂ. 2:10.
ದೊಡ್ಡ ಸಭೆ ಅಂದ್ಮೇಲೆ ಅಲ್ಲಿ ತುಂಬ ಜನ ಪ್ರಚಾರಕರು ಇರ್ತಾರೆ. ಹಾಗಾಗಿ ನಾವು ತುಂಬ ಸಲ ಕೈ ಎತ್ತಿದ್ರೂ ನಮಗೆ ಅವಕಾಶನೇ ಸಿಗದೇ ಹೋಗಬಹುದು. ಹಾಗಂತ ಕೂಟಗಳಲ್ಲಿ ಉತ್ರ ಹೇಳೋದನ್ನ ನಿಲ್ಲಿಸಿಬಿಡಬೇಡಿ. ಪ್ರಯತ್ನ ಮಾಡ್ತಾನೇ ಇರಿ. ಕೂಟಗಳಲ್ಲಿರೋ ಎಲ್ಲಾ ಭಾಗಗಳನ್ನೂ ಚೆನ್ನಾಗಿ ತಯಾರಿ ಮಾಡ್ಕೊಂಡು ಬನ್ನಿ. ಆಗ ಉತ್ರ ಹೇಳೋಕೆ ಒಂದಲ್ಲ ಒಂದು ಅವಕಾಶ ಖಂಡಿತ ಸಿಗುತ್ತೆ. ಕಾವಲಿನಬುರುಜು ಅಧ್ಯಯನದಲ್ಲಿ ಉತ್ರ ಹೇಳೋಕೆ ನೀವು ಏನೆಲ್ಲ ಮಾಡಬಹುದು? ಮುಖ್ಯ ವಿಷ್ಯಕ್ಕೂ ಒಂದೊಂದು ಪ್ಯಾರಾಗೂ ಏನು ಸಂಬಂಧ ಅಂತ ಯೋಚ್ನೆ ಮಾಡಿ ಉತ್ರಗಳನ್ನ ತಯಾರಿ ಮಾಡ್ಕೊಳ್ಳಿ. ಕೆಲವೊಮ್ಮೆ ಸುಲಭವಾಗಿ ಅರ್ಥ ಆಗದಿರೋ ಬೈಬಲ್ ವಿಷ್ಯಗಳು ಪ್ಯಾರದಲ್ಲಿ ಇರಬಹುದು. ಅಂಥ ಪ್ಯಾರಗಳನ್ನ ಚೆನ್ನಾಗಿ ತಯಾರಿ ಮಾಡ್ಕೊಂಡು ಬನ್ನಿ. ಆಗ ಉತ್ರ ಹೇಳೋಕೆ ಅವಕಾಶ ಸಿಕ್ಕೇ ಸಿಗುತ್ತೆ. ಕೂಟದಲ್ಲಿ ಒಂದು ಉತ್ರ ಹೇಳೋಕೂ ಅವಕಾಶ ಸಿಗಲಿಲ್ಲಾಂದ್ರೆ ಆಗೇನು ಮಾಡೋದು? ಕೂಟ ಆರಂಭ ಆಗೋ ಮುಂಚೆನೇ ಚರ್ಚೆಯನ್ನ ನಡೆಸೋ ಸಹೋದರನ ಹತ್ರ ಮಾತಾಡಿ. ಯಾವ ಪ್ಯಾರಗೆ ಉತ್ರ ತಯಾರಿ ಮಾಡ್ಕೊಂಡು ಬಂದಿದ್ದೀರ ಅಂತ ಅವ್ರಿಗೆ ಹೇಳಿ. ಆಗ ಕೂಟದಲ್ಲಿ ಉತ್ರ ಹೇಳೋಕೆ ಒಂದು ಅವಕಾಶ ಆದ್ರೂ ಸಿಕ್ಕೇ ಸಿಗುತ್ತೆ. w23.04 21-22 ¶9-10